ಕಾಯಕಲ್ಪ

ಪ್ರತಿ ಸಂಜೆ ತಲೆಯ ಮೇಲೆ
ಹಾಯ್ದು ಹೋಗುವ ರೆಕ್ಕೆಗಳ
ತಂಪಿನಲಿ ನಿನ್ನ ಪ್ರೀತಿ ತೇಲಿ
ಯಾವುದೋ ಪರಿಮಳ ಹೊತ್ತ
ಸೂರ್‍ಯ ಮುಳುಗುತ್ತಾನೆ
ಆತ್ಮದ ಬೇರುಗಳಲ್ಲಿ ಶಬ್ದಗಳು ಇಳಿಯುತ್ತವೆ.

ನಕ್ಷತ್ರ ತುಂಬಿದ ನೀಲಿಯಲ್ಲಿ
ಮಹಾ ಮೌನ ಅಗಾಧವಾಗಿ
ಕೈ ಬೆರಳುಗಳಿಗೆ ಸ್ಪರ್ಶ ನೀಡಿ
ಎಲ್ಲಾ ಎಳೆಗಳು ತೀಡುತ್ತವೆ
ಏಕಾ‌ಏಕಿ ಬಂದ ನೆನಪು ಸಪ್ನ
ನಿದ್ರಿಸುವ ಕಣ್ಣುಗಳ ತುಂಬ ಕವಿತೆ
ವಿರಮಿಸಿಕೊಳ್ಳುತ್ತವೆ.

ಕೆಂಪು ಕಿರಣಗಳ ರಕ್ತದೋಕುಳಿ
ಓಣಿಯ ಎಲೆ ಎಲೆಗೂ ಬೆಳಕು
ಹರಡಿ ಹಾಸಿ ಒಳಮನೆಯಲಿ
ಸ್ನಾನ ಆಚೆದಡ ಮುಟ್ಟುವ ನೀರು
ಈಚೆ ಸುಳಿದಾಡುವ ಬೆಳಕು
ಚಲಿಸುವ ಮೌನ ಗಾಳಿ ಬಿಳಿ ಹೊಲ
ಬದುವಿನ ತುಂಬ ನೀಲಿ ಹೂಗಳು
ಅರಳುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅತಿಸಣ್ಣ ಉಪಗ್ರಹ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೯

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

cheap jordans|wholesale air max|wholesale jordans|wholesale jewelry|wholesale jerseys